ಎಐಸಿಸಿಟಿಯು ರಾಜ್ಯಾಧ್ಯಕ್ಷರಾಗಿ ಕಾಂ.ಬಾಲನ್ ಆಯ್ಕೆ

ದಿನಾಂಕ 16.02.2014 ರಂದು ಮಹದೇವಪುರದ ಜಿಬಿ ಹಾಲ್ನಲ್ಲಿ ನಡೆದ ಬೆಂಗಳೂರು ನಗರದ ಸಿಪಿಐಎಂಎಲ್ ಲಿಬರೇಷನ್ ಪಕ್ಷದ ಘಟಕದ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಹಿರಿಯ ಕಾರ್ಮಿಕ ಮುಖಂಡ ಹಾಗೂ ಖ್ಯಾತ ಕ್ರಿಮಿನಲ್ ನ್ಯಾಯವಾದಿಗಳಾದ ಕಾಂ.ಬಾಲನ್ ರವರು ಪಕ್ಷಕ್ಕೆ ಸೇರಿದರು.
ನಂತರದ ಪಕ್ಷದ ಮುಂಚೂಣಿ ತಂಡದ ಸಭೆಯಲ್ಲಿ ಕಾರ್ಮಿಕ ಸಂಘಟನೆಯಾದ ಎಐಸಿಸಿಟಿಯು ವಿನ ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾಂ. ಬಾಲನ್ರವರನ್ನು ರಾಜ್ಯಾಧ್ಯಕ್ಷರಾಗಿ, ಕಾಂ. ಭಾರಧ್ವಾಜ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕಾಂ.ಅಪ್ಪಣ್ಣ ರವರು ಆಯ್ಕೆ ಆಗಿದ್ದಾರೆಂದು ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷರಾದ ವಿ.ಶಂಕರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Back-to-previous-article
Top