ಸೌಜನ್ಯಳ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆ ಆಗ್ರಹಿಸಿ! ಶೀಘ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ!

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕ್ರೂರ ಕೊಲೆಯ ಪ್ರಕರಣ ನಡೆದು ವರ್ಷವಾದರೂ, ಈ ಅಪರಾಧಗಳನ್ನು ಸಾಬೀತು ಪಡಿಸಲು ಸಾಕಷ್ಟು ಪುರಾವೆಗಳು ದೊರಕ್ಕಿದ್ದರೂ ಪೋಲೀಸರು ಅತ್ಯಾಚಾರದ ಪ್ರಕರಣವನ್ನು ಸಹ ದಾಖಲಿಸಲು ನಿರಾಕರಿಸಿರುವುದು ಮತ್ತು ತನಿಖೆಯಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸದಿರುವುದನ್ನು ಸಿಪಿಐಎಂಎಲ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ (ಎಐಪಿಡಬ್ಲ್ಯೂ), ಎಐಎಸ್ಎ, ಆರ್ವೈಎ, ಎಐಎಎಲ್ಎ ಮತ್ತು ಎಐಸಿಸಿಟಿಯು ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಧರ್ಮಸ್ಥಳದ ಪ್ರಭಾವಶಾಲಿ ಆಡಳಿತ ಮತ್ತು ಇತರ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ಪೋಲೀಸರು ವರ್ತಿಸುತ್ತಾ ಕರ್ತವ್ಯ ನಿರ್ವಹಿಸುವುದರಲ್ಲಿ ವಿಫಲರಾಗಿದ್ದಾರೆ, ಮತ್ತು ಕಾನೂನು ಮತ್ತು ಸಾರ್ವಜನಿಕರಿಗೆ ದ್ರೋಹ ಬಗೆದಿದ್ದಾರೆ. ಆರೋಪಿಗಳು ಮತ್ತು ಅನುಮಾನಿತರನ್ನು ಬಂಧನಕ್ಕೊಳಪಡಿಸದೆ, ವಿಚಾರಣೆ ಮಾಡದೆ ಅವರನ್ನು ರಕ್ಷಿಸುತ್ತಿದ್ದಾರೆ. ಸೌಜನ್ಯಳ ನ್ಯಾಯಕ್ಕಾಗಿ ಹೋರಾಡುತ್ತಿರುವವರ ಮೇಲೆ ಹಲ್ಲೆ ನಡೆಯುತ್ತಿದ್ದರೂ ಪೋಲೀಸರು ಮಧ್ಯಪ್ರವೇಶಿಸುತ್ತಿಲ್ಲ. ಅಷ್ಟಲ್ಲದೆ, ತಪ್ಪಿತಸ್ಥರನ್ನು ಸೆರೆಹಿಡಿಯಲು ಲಭ್ಯವಿರುವ ಪುರಾವೆಗಳನ್ನು ಧ್ವಂಸ ಮಾಡುವುದು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ಪೋಲೀಸರು ಮತ್ತು ಧರ್ಮಸ್ಥಳದ ಆಡಳಿತ ಮೇಲುಗೈ ಸಾಧಿಸಿದ್ದಾರೆ. ಪೋಲೀಸರು ನ್ಯಾಯ ಒದಗಿಸುವುದರಲ್ಲಿ ವಿಫÀಲವಾಗಿರುವುದರಿಂದ, ಬಲಿಷ್ಠ ಶಕ್ತಿಗಳು ಆರೋಪಿ ಸ್ಥಾನದಲ್ಲಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತೇವೆ. ಈ ಪ್ರಕರಣವನ್ನು ಫಾಸ್ಟ್ ಟ್ರಾಕ್ ಕೋರ್ಟ್ನಲ್ಲಿ (ಶೀಘ್ರಗತಿ ನ್ಯಾಯಾಲಯದಲ್ಲಿ) ನಡೆಸಿ ಅಪರಾಧಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತೇವೆ. ಕರ್ತವ್ಯ ಪಾಲನೆಯಲ್ಲಿ ವಿಫÀಲವಾಗಿರುವ ಪೋಲೀಸರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸುತ್ತೇವೆ.
ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಸಹ ಒಪ್ಪಿದಂತೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ ಎಂದು ಹೇಳಲ್ಪಡುವ 40ಕ್ಕಿಂತಲೂ ಹೆಚ್ಚಿನ ಅಸಹಜ ಮರಣಗಳ ಬಗ್ಗೆಯೂ ಸಿಬಿಐ ತನಿಖೆ ಪ್ರಾರಂಭಿಸಬೇಕು. ಇದೇ ದಶಕದಲ್ಲಿ ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎಂದು ಹೇಳಲ್ಪಡುವ 440ಕ್ಕಿಂತಲೂ ಹೆಚ್ಚಿನ ಅಸಹಜ ಮರಣಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ.
ಸೌಜನ್ಯಳ ಪ್ರಕರಣದಲ್ಲಿ ಮತ್ತು ಈ ಮಾರ್ಮಿಕ ಅಸಹಜ ಮರಣಗಳ ಪ್ರಕರಣಗಳಲ್ಲಿ ಇಡೀ ಧರ್ಮಸ್ಥಳದ ಆಡಳಿತವನ್ನು ನಿಸ್ಪಕ್ಷಪಾತವಾದ ತನಿಖೆಗೆ ಒಳಪಡಿಸಬೇಕು. ಧರ್ಮಸ್ಥಳದ ಆಡಳಿತಕ್ಕೆ ಸಂಬಂಧಪಟ್ಟ ಯಾರೊಬ್ಬರೂ ಕಾನೂನು ಮತ್ತು ಸಂವಿಧಾನದ ಚೌಕಟ್ಟಿಗೆ ಹೊರತಾದವರಲ್ಲ. ತನಿಖೆಗೆ ಒಳಪಡುವುದು, ಒಳಪಡದಿರುವುದು ಭÀಕ್ತರ ಅಥವಾ ಮಠಗಳ ಭಾವನೆಗೆ ಸಂಬಂಧಪಟ್ಟದಲ್ಲ, ಅದು ಕಾನೂನು ಮತ್ತು ಕಾನೂನು ಕ್ರಮಗಳಿಗೆ ಸಂಬಂಧಪಟ್ಟ ವಿಷಯವಾಗಿ ಇರಬೇಕು. ಈ ತನಿಖೆಯನ್ನು ಧಾರ್ಮಿಕ ನಂಬಿಕೆಯ ವಿಚಾರವಾಗಿ ಬದಲಾಯಿಸುವುದು ಅಥವಾ ಭಕ್ತಾದಿಗಳ ಅಮಾಯಕತೆಯನ್ನು, ಭಕ್ತಿಭಾವನೆಗಳನ್ನು ತಮ್ಮನ್ನು ರಕ್ಷಿಸಿಕೊಳ್ಳಲು ದುರ್ಬಳಕೆ ಮಾಡುವುದು ನ್ಯಾಯವಾದದ್ದಲ್ಲ. ಇದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕುಮ್ಮಕ್ಕು ನೀಡುತ್ತಿವುದು ಕಾನೂನು ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತಿದೆ.
ಮೇಲಿನ ಎಲ್ಲಾ ಒತ್ತಾಯಗಳೊಂದಿಗೆ ಸಿಪಿಐಎಂಎಲ್ ಲಿಬರೇಷನ್ ಪಕ್ಷ 25 ಅಕ್ಟೋಬರ್ 2013ರಂದು ರಾಜ್ಯಮಟ್ಟದಲ್ಲಿ ”ಧರಣಿ ಸತ್ಯಾಗ್ರಹ” ನಡೆಸಿತು. ಈ ಧರಣಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರÄ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಮತ್ತು ನಡೆದ ಪ್ರಕರಣಗಳ ಪಾರದರ್ಶಕ ತನಿಖೆ ನಡೆಸಿ ಮಹಿಳೆಯರು ಮತ್ತು ಬಡವರಿಗೆ ನ್ಯಾಯ ಒದಗಿಸುವಂತೆ ಮಾಡಬೇಕು ಮತ್ತು ಧರ್ಮಸ್ಥಳದ ಆಡಳಿತದ ಜವಾಬ್ದಾರಿಯನ್ನು ರಾಜ್ಯ ಸÀರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಬೆಂಗಳೂರು, ಮೈಸೂರು, ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಧರಣಿ ನಡೆಸಿದರು.

Back-to-previous-article
Top